ಶಬರಿಮಲೆ ವಿಷಯವು ದೇವಾಲಯ ಪ್ರವೇಶ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಇತ್ಯರ್ಥಪಡಿಸಲು ಒಂಬತ್ತು ನ್ಯಾಯಾಧೀಶರ ಪೀಠದ ಅಗತ್ಯವಿರುವ ಆಳವಾದ ಸಾಂವಿಧಾನಿಕ ಚರ್ಚೆಯನ್ನು ಹುಟ್ಟುಹಾಕಿದ ಕಾರಣ ಇದು ಅಸಾಧಾರಣವಾಯಿತು.
ಕೇರಳದ (Kerala) ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ (Sabarimala Temple) ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಸಪ್ಟೆಂಬರ್ 2018 ರ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಲಾಗಿದ್ದು, ಈ ಹಿನ್ನಲೆಯಲ್ಲಿ ಏಪ್ರಿಲ್ 7 ರಿಂದ 22 ರವರೆಗೆ, ಸುಪ್ರೀಂ ಕೋರ್ಟ್ನ (Supreme Court) ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು 67 ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. ಸುಪ್ರೀಂ ಕೋರ್ಟ್ನ ಈ ಒಂಭತ್ತು ನ್ಯಾಯಾಧೀಶರ ಪೀಠವು ಅತ್ಯಂತ ಅಪರೂಪದ ಹಾಗೂ ಸಾಂವಿಧಾನಿಕ ಮಹತ್ವದ, ದೇಶದ ಕಾನೂನನ್ನು ಮರು ವ್ಯಾಖ್ಯಾನಿಸಬಹುದಾದ ಪ್ರಕರಣಗಳಿಗೆ ಮೀಸಲಾಗಿರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ಬಾರಿ ಶಬರಿಮಲೆಯ ಈ ಪ್ರಕರಣವನ್ನು 9 ನ್ಯಾಯಾಧೀಶರುಗಳು ಮರುವಿಚಾರಣೆ ನಡೆಸಲಿದ್ದಾರೆ.
ಭಾರತ ಸಂವಿಧಾನದ 145(3) ನೇ ವಿಧಿಯ ಅಡಿಯಲ್ಲಿ, ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಕಾನೂನಿನ ಗಣನೀಯ ಪ್ರಶ್ನೆಯನ್ನು ಒಳಗೊಂಡಿರುವ ಯಾವುದೇ ಪ್ರಕರಣವನ್ನು ಕನಿಷ್ಠ ಐದು ನ್ಯಾಯಾಧೀಶರು ವಿಚಾರಣೆ ಮಾಡಬೇಕು. ವಿಷಯವು ಅಸಾಧಾರಣ ಸಾಂವಿಧಾನಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾಗ ಅಥವಾ ವಿಷಯವು ಆಡಳಿತದ ರಚನೆ ಅಥವಾ ದೇಶಾದ್ಯಂತದ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಿದರೆ ಮಾತ್ರ ಒಂಬತ್ತು ನ್ಯಾಯಾಧೀಶರ ಪೀಠವನ್ನು ರಚಿಸಲಾಗುತ್ತದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”